ಶಪಥ

ಪ್ರತಿ ಕತ್ತಲೆಗೆ ತಾನು
ಮೆರೆವ-ಮೈತೆರೆವ
ಬೆಳಕನ್ನು ತಿಂದ ಉತ್ಸಾಹ
ಪ್ರತಿ ಬೆಳಕಿಗೂ ಅಬ್ಬ
ಅಂಥ ಕತ್ತಲೆಯನ್ನೂ
ಸೀಳಿ ಹೊರಜಿಗಿದ ಮುಗುಳುನಗೆ

ಈ ಗಿಡದ ಹೂವೆಲ್ಲ
ಬಾಡಿ ಬೀಳುತ್ತವಲ್ಲ
ತನ್ನ ಉಡಿಗೇ ಎಂದು ಮಣ್ಣತಾತ್ಸಾರ
ಈ ಮಣ್ಣಿನದೆ ಸಾರ
ಹೀರಿ ಬೆಳೆಯುತ್ತೇನೆ
ಅರಳುವೆನು ಪುನಹಾ
ಮತ್ತೆ ಬದುಕಿಲ್ಲ ವಿನಹಾ
ಇದು ಗಿಡ ತೊಟ್ಟ ಶಪಥ

ಪಶ್ಚಿಮದ ಗೂಬೆ ಹೇಳುತ್ತೆ
ನೋಡು ತಿನ್ನುತ್ತೇನೆ
ನಿನ್ನೊಡಲ ಮರಿಯ
ತಾಳುತ್ತೆ ಪೂರ್ವದ ಹಕ್ಕಿ
ಬಂಗಾರ ವರ್ಣದ ಸೂರ್ಯ
ಪಶ್ಚಿಮದ ಎದೆ ಬಿರಿದು
ಏಳುತ್ತಾನೆ-ಎದುರಿನ ದಿಕ್ಕು
ಕೇಳುತ್ತಾನೆ
ಹೇಗೆ, ನಾನು ಮಾಡಿದ್ದು ಸರಿಯೆ ?

ಹಾಗೆ
ಕವಿತೆಯಾಗದ ಕೆಲವು
ವಸ್ತುಗಳು ಕೇಳುತ್ತವೆ
ಏನಯ್ಯಾ ಉದ್ದಂಡ ದೋರ್ಧಂಡ
ನೀನು ಹುಟ್ಟಿದುದೆ ಆಯ್ತಲ್ಲ
ಬಹು ದಂಡ ?

ಏನೂ ಅನ್ನದು ಜೀವ
ಒಂದು ಶುಭ ಮುಂಜಾವು
ಪೂರ್ವಕ್ಕೆ ಸೂರ್ಯ ಹೊಳೆದಂತೆ
ಹಾಡುಗಳ ನುಡಿಸುವುದು
ನೀನು ಆಡಿದ್ದೆ ಉಳಿದದ್ದು, ನೋಡು ಕಂಡ್ಯ ?
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಾವನದಿ ದಂಡೆಯ ಮೇಲೆ
Next post ಜಿಟ್ಟಿಹುಳಗಳು ಎದ್ದಾವು ನೋಡು

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys